Slide
Slide
Slide
previous arrow
next arrow

ಜ.14ಕ್ಕೆ ‘ಭರವಸೆಯ ಪಯಣ’ ವಿಶಿಷ್ಟ ಕಾರ್ಯಕ್ರಮ

300x250 AD

ಶಿರಸಿ: ಇಲ್ಲಿನ ಸಂಚಲನ ಸಂಸ್ಥೆಯು ಸಂಕ್ರಾಂತಿ ಪ್ರಯುಕ್ತ ಆಯೋಜಿಸಿರುವ “ಭರವಸೆಯ ಪಯಣ”ವಿಶಿಷ್ಟ ಕಾರ್ಯಕ್ರಮವು ಜ.14, ರವಿವಾರ ಮಧ್ಯಾಹ್ನ 4 ಗಂಟೆಯಿಂದ ರಂಗಧಾಮ, ನೆಮ್ಮದಿ ಆವರಣದಲ್ಲಿ ನಡೆಯಲಿದೆ. ಲೇಖಕಿ ತೇಜಸ್ವಿನಿ ಹೆಗಡೆ ಉಪಸ್ಥಿತಿಯಲ್ಲಿ, ಒಂದೇ ವೇದಿಕೆಯಲ್ಲಿ ಹನ್ನೊಂದು ಜನ ದೈಹಿಕ ನ್ಯೂನ್ಯತೆಯನ್ನು ಮೀರಿ, ಜೀವನ್ಮುಖಿಗಳಾಗಿ ಸ್ಫೂರ್ತಿದಾಯಕರಾಗಿರುವ ವಿಶಿಷ್ಟ ವ್ಯಕ್ತಿಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಗದುಗಿನ ಪುಟ್ಟರಾಜ ಗವಾಯಿಗಳ ಶಿಷ್ಯರ ಅಂಧರ ಕಲಾತಂಡ ಶಿರಸಿ ಇವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಎಲ್ಲರಿಗೂ ಸ್ಪೂರ್ತಿ ನೀಡುವಂತಹ ಈ ಅಪರೂಪದ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಆಹ್ವಾನಿತ ವಿಶಿಷ್ಟ ವ್ಯಕ್ತಿಗಳ ಅಭಿನಂದನಾ ಕಾರ್ಯಕ್ರಮ ಹಾಗೂ ಅಂಧರ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಸಂಚಲನ ಸಂಸ್ಥೆಯ ಪರವಾಗಿ ಮುಖ್ಯ ಸಂಚಾಲಕಿ ಸುಧಾ ಗಣಪತಿ ಭಟ್ಟ ಹರಿಗಾರ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top